Friday, August 4, 2017

ಕಾಡಿನ ಬೆಂಕಿ - ಡಿಸೋಜ ನಾ

Kadina Benki - Dsouza Na   ಈ ಕಾದಂಬರಿಯ ಹಿಂದೆ ಒಂದು ಕತೆ ಇದೆ. ೧೯೮೪ರ ಸುಮಾರಿಗೆ ಶಿವಮೊಗ್ಗೆಯ ಶ್ರೀಯುತ ಅಶೋಕ ಪೈಗಳು ಒಂದು ಕತೆಯನ್ನು ಹೇಳಿದರು. ಮನುಷ್ಯನ ಬದುಕಿನ ಪ್ರಮುಖ ಆಕರ್ಷಣೆಯಾದ ಲೈಂಗಿಕ ವಿಷಯಕ್ಕೆ ಸಂಬಂಧಪಟ್ಟ ಕತೆ ಅದು. ಈ ಕತೆಯನ್ನು ಅವರು ಹೇಳುವಾಗ ಅಲ್ಲಿ ನನ್ನ ಸ್ನೇಹಿತರಾದ ಸಂತೋಷಕುಮಾರ ಗುಲ್ವಾಡಿ ಈ ಕತೆಯನ್ನು ಒಂದು ಕಾದಂಬರಿಯನ್ನಾಗಿ ಬರೆಯಲು ಹೇಳಿದರು. ಅಲ್ಲದೆ ಈ ಕಾದಂಬರಿಯನ್ನು ಅವರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಿಸುವ ಭರವಸೆಯನ್ನೂ ನೀಡಿದರು. ಕತೆ ನನ್ನ ಹಿಂಡಿ ಹಾಕಿದ್ದರಿಂದ...


ಕುಂಜಾಲು ಕಣಿವೆಯ ಕೆಂಪು - ಡಿಸೋಜ ನಾ

Kunjalu Kaniveya Kempu Hoovu  - Dsouza Na ಮುನ್ನುಡಿಯಿಂದ: ೧೯೮೭ರಲ್ಲಿ ಈ ಕೃತಿ ಪ್ರಕಟವಾದಾಗ ನಾವು ಪರಿಸರದ ಬಗ್ಗೆ ಒಂದು ಬಗೆಯ ಅವ್ಗಜ್ಞೆಯನ್ನು ಬೆಳೆಸಿಕೊಂಡಿದ್ದೆವು. ಇಂದು ಈ ತಿರಸ್ಕಾರ ಮತ್ತೊ ಹೆಚ್ಚಾಗಿದೆ. ಇಂದು ಗಣಿಗಾರಿಕೆ, ನಗರ ನಿರ್ಮಾಣ, ಅಣೆಕಟ್ಟುಗಳ ನಿರ್ಮಾಣ, ರಸ್ತೆಗಳ ನಿರ್ಮಾಣ, ವ್ಯವಸಾಯ, ವಿದ್ಯುತ್ ಮಾರ್ಗಗಳು, ಕಾರ್ಖಾನೆಗಳು ಎಂದೆಲ್ಲ ಪರಿಸರದ ಮೇಲೆ ಅವ್ಯಾಹತವಾದ ದಬ್ಬಾಳಿಕೆ ನೆಡೆಯುತ್ತಿದೆ. ನಿರಂತರವಾದ ಈ ಪರಿಸರ ನಾಶ ನಮ್ಮ ಪಾಲಿಗೆ ಪರಿಸರ ಶಾಪವಾಗಿ ಪರಿಣಮಿಸಿದೆ. ನಾವು ಉಳಿಸಿಕೊಂಡುದಕ್ಕಿಂತ ಕಳೆದುಕೊಂಡಿರುವುದೇ ಅಧಿಕವಾಗಿದೆ. ತಂದೆಯಾದವನು ಕಂಡ ಬದುಕನ್ನು...


Sunday, June 11, 2017

ನಾವಲ್ಲ : ಕಥಾಸಂಕಲನ

Navalla - Sethuram   ಮುನ್ನುಡಿಯಿಂದ ಎಚ್. ಎಸ್. ವೆಂಕಟೇಶಮೂರ್ತಿ : ರಂಗಭೂಮಿಯಲ್ಲಿ ನಾಟಕ ಕರ್ತೃ, ನಟ, ನಿರ್ದೇಶಕರಾಗಿ ಹೆಸರು ಮಾಡಿರುವ ಗೆಳೆಯ ಸೇತೂರಾಮ್, ಈಗ ತಮ್ಮ ಆರು ಕಥೆಗಳ ಸಂಕಲನ ಹೊರತರುತ್ತಿದ್ದಾರೆ. ನಿಷಿತವಾದ ಕತ್ತಿಯಲುಗಿನಂಥ ಭಾಷೆಯೇ ಅವರ ಅಪೂರ್ವ ಶಕ್ತಿ. ಬದುಕಿನ ಆಳ ಅಗಲಗಳನ್ನು ಅನುಭವಗತ ಮಾಡಿಕೊಂಡಿರುವ ಈ ಸೂಷ್ಕ್ಮ ಸಂವೇದಿ. ಜೀವನ ಮತ್ತು ಅದರ ಕಠೋರ ಮುಖವನ್ನು ನಿರ್ಮಮವಾಗಿ ತಮ್ಮ ಕಥೆಗಳಲ್ಲಿ ಪದರಪದರವಾಗಿ ಸೀಳಿ ಇಡುವರಾದರೂ ಆಳದಲ್ಲಿ ಗಾಢವಾಗಿ ಜೀವನಪ್ರೀತಿಯುಳ್ಳವರು. ಅವರ ಕಥೆಗಳ ತಿಕ್ಕಾಟ ಹುಟ್ಟುವುದೇ ಈ ಘರ್ಷಣದಲ್ಲಿ,...


Sunday, May 1, 2016

ಹಲವು ಮಕ್ಕಳ ತಾಯಿ - ರಾಜಗೋಪಾಲ್ ಎಚ್ ವೈ

A Mother To Many -  Rajagopal H Y ವಿಶ್ವವಾಣಿ ದಿನ ಪತ್ರಿಕೆಯಿಂದ (17-04-2016)   ಬೆಂಗಳೂರಿನ ಮಕ್ಕಳ ಕೂಟದ ಸಂಸ್ಥಾಪಕರಲ್ಲೊಬ್ಬರಾದ ಎಚ್ ವೈ ಸರಸ್ವತಿಯವರು ಹಿರಿಯ ಚಿಂತಕ ಎಚ್.ವೈ. ಶಾರದಾಪ್ರಸಾದರತಾಯಿ. ಬಹುಮುಖ ಪ್ರತಿಭೆಗಳ ಸಂಗಮವಾಗಿದ್ದ ಸರಸ್ವತಿ ಅವರ ಬಗ್ಗೆ ಅವರ ಇನ್ನೊಬ್ಬ ಪುತ್ರ ಎಚ್.ವೈ.ರಾಜಗೋಪಾಲ್  ಪುಸ್ತಕವೊಂದನ್ನು ಸಂಪಾದಿಸಿದ್ದಾರೆ. ಅಭಿನವ ಪ್ರಕಾಶನ ಪ್ರಕಟಿಸಿರುವ ‘ಹಲವು ಮಕ್ಕಳ ತಾಯಿ’ ಎಂಬ ಹೆಸರಿನ ಈ ಕೃತಿಯಲ್ಲಿರುವ ರಾಜಗೋಪಾಲರ ಲೇಖನದ ಆಯ್ದ ಭಾಗ ಇಲ್ಲಿದೆ.   ಹೊರಗಡೆ ಮನಸ್ಸನ್ನು ಸೂರೆಗೊಳ್ಳುವಂತೆ ಚೆಲ್ಲಿದ ಬೆಳದಿಂಗಳು. ಜೊತೆಗೆ...


Saturday, April 30, 2016

ಬೆಂಗಳೂರು - ಜೋಗಿ ( ಗಿರೀಶ್ ರಾವ್ )

Bengaluru - Jogi ( Girish Rao ) ವಿಶ್ವವಾಣಿ ದಿನ ಪತ್ರಿಕೆಯಿಂದ (01-05-2016)   ಜೋಗಿಯವರ ಹೊಸ ಕಾದಂಬರಿಯ ಹೆಸರು ‘ಬೆಂಗಳೂರು’. ಬೆಂಗ ಳೂರೆಂಬ ಊರಿಗಿರುವ ಗುಣಗಳು ಈ ಕೃತಿಗೂ ಇವೆ. ‘ಗ್ರೀಷ್ಮ- ಹುಚ್ಚು ಬಿಸಿಲು, ಹುಚ್ಚು ಧಗೆ, ಹುಚ್ಚೆದ್ದಿದೆ ಕ್ರೌರ್ಯನ’ ಎಂಬ ಟ್ಯಾಗ್ಲೈನ್ ಕೃತಿಯ ಅಂತರಂಗ ವನ್ನು ತೆರೆಯುವ ಪ್ರವೇಶಿಕೆಯಂತಿದೆ. ಇಲ್ಲಿ ನಾಯಕರಿಲ್ಲ; ಪ್ರತಿನಾಯಕರಿದ್ದಾರೆ. ಸ್ವತಃ ಇದರ ಕರ್ಮ ಭೂಮಿಯೇ ಖಳ ನಾಯಕಿ. ಬೆಂಗಳೂರಿಗೆ ತಾಯಿಯ ವಾತ್ಸಲ್ಯವಿಲ್ಲ, ಅಕ್ಕನ ಮಮತೆ ಯಿಲ್ಲ. ಅದಕ್ಕಿರುವುದು ಸುಖದ ಭ್ರಮೆ ನೀಡುವ ವೇಶ್ಯೆಯ...


Friday, July 3, 2015

ಇಲ್ಲಿಯವರೆಗೆ ಇಷ್ಟು - ಜೋಗಿ ( ಗಿರೀಶ್ ರಾವ್ )

Illiyavarege Istu -Jogi ( Girish Rao ) ಪುಸ್ತಕದ ಮುನ್ನುಡಿಯಿಂದ: ನೇಪಾಳದಲ್ಲಿ ಅಂಥ ದಟ್ಟ ಕಾಡುಗಳಿವೆ ಅನ್ನುವುದು ಗೊತ್ತಿರಲಿಲ್ಲ. ನಮ್ಮನ್ನು ಅಲ್ಲಿಗೆ ಕರೆದೊಯ್ದ ಪುಣ್ಯಾತ್ಮ ಚಿತ್ವನ್ ಎಂಬ ಅಭಯಾರಣ್ಯಕ್ಕೆ ಕರೆದೊಯ್ದಾ ಅಲ್ಲಿರುವ ಒಂದು ರೆಸಾರ್ಟಿನಲ್ಲಿ ಬಿಟ್ಟ ನಡುರಾತ್ರಿ ನಿದ್ದೆಬಾರದೇ ಹೊರಗೆ ಬಂದರೆ ಉದ್ದಕ್ಕೂ ಹಬ್ಬಿದ ಕಾಡು. ಬೆಳದಿಂಗಳು ಇಷ್ಟಿಷ್ಟೇ ಸೋರುತ್ತಿತ್ತು. ಆ ಕತ್ತಲಲ್ಲಿ ನಡೆಯುತ್ತಾ ಹೋದರೆ ಧುತ್ತನೆ ಎದುರಾದದ್ದು ಅಷ್ಟೆತ್ತರದ ಆನೆ. ಅದರ ಬುಡಕ್ಕೇ ಬಂದು ನಿಂತುಬಿಟ್ಟಿದೆ. ಆನೆ ಲೇಖಕನೆಂಬ ಕಾರಣಕ್ಕೋ ಏನೋ ಏನೂ ಮಾಡಲಿಲ್ಲ. ಆ ರಾತ್ರಿ ಎದೆ...


Sunday, June 21, 2015

ನಿಮ್ಮಷ್ಟು ಸುಖಿ ಯಾರಿಲ್ಲ - ವಿಶ್ವೇಶ್ವರ ಭಟ್

Nimmashtu Sukhi Yarilla - Vishweshwara Bhat   ಸ್ವಾಮಿ ಅನಾಮಧೆಯಪೂರ್ಣ ಎಂಬ ಹೆಸರಿನಲ್ಲಿ ನಾನು 'ಬತ್ತದ ತೆನೆ' ಎಂಬ ಅಂಕಣ ಬರೆಯುತ್ತಿದ್ದೆ, ನಂತರ ಅದೇ ಹೆಸರಿನಲ್ಲಿ ಪುಸ್ತಕವನ್ನು ಸಹ ಪ್ರಕಟಿಸಿದೆ ಈ ಕೃತಿಗೆ ಸಿಕ್ಕ ಪ್ರತ್ರಿಕ್ರಿಯೆ ಅಭೂತಪೂರ್ವ. ಈಗಲೂ ಅನೇಕರು ಕೃತಿಗೆ ಓದು ನೀಡಿದ ಸ್ಪೂರ್ತಿ ಬಗ್ಗೆ ಬರೆಯುತ್ತಿರುತ್ತಾರೆ. ಇತ್ತೀಚಿಗೆ 'ಬತ್ತದ ತೆನೆ'ಯನ್ನು ಓದಿದ ಯೋಗಿ ದುರ್ಲಭಜೀ  ಅವರು. 'ಇಂತ ಕೃತಿ ಬಹಳ ಉಪಯುಕ್ತ. ನೀವು ಇದರ ಮುಂದಿನ ಭಾಗವನ್ನು ಬರೆಯಬೇಕು. ಜನರಿಗೆ ಉಪದೇಶಗಳನ್ನು ಕೊಡದೇ, ಸಲಹೆ. ಟಿಪ್ಸ್ ಗಳನ್ನೂ...


Koon Hack Blogger Templates